ಕುರಿಯ ಗಣಪತಿ ಶಾಸ್ತ್ರಿಗೆ ಆಸ್ರಣ್ಣ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಸೆಪ್ಟೆ೦ಬರ್ 6 , 2013
|
ಸೆಪ್ಟೆ೦ಬರ್ , 6 , 2013
|
ಕುರಿಯ ಗಣಪತಿ ಶಾಸ್ತ್ರಿಗೆ ಆಸ್ರಣ್ಣ ಪ್ರಶಸ್ತಿ
ಮಂಗಳೂರು :
ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಶಿಷ್ಯವೃಂದದ ವತಿಯಿಂದ 2013ನೇ ಸಾಲಿನಲ್ಲಿ ನೀಡಲಾಗುವ 'ಕಟೀಲು ಗೋಪಾಲಕೃಷ್ಣ ಆಸ್ರಣ್ಣ' ಪ್ರಶಸ್ತಿಗೆ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಆಯ್ಕೆಯಾಗಿದ್ದಾರೆ. 1958 ರಲ್ಲಿ ಮಂಜೇಶ್ವರದಲ್ಲಿ ಜನಿಸಿದ ಇವರು, ಸಂತ ಅಲೋಶಿಯಸ್ನಲ್ಲಿ ಪಿಯುಸಿ ಮತ್ತು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿದ್ದಾರೆ. ತಂದೆ ರಾಮಶಾಸ್ತ್ರಿ ಮತ್ತು ದೊಡ್ಡಪ್ಪ ವಿಠಲ ಶಾಸ್ತ್ರಿ ಯಕ್ಷಗಾನದ ಪುರಾಣ ಪುರುಷರು.
9ನೇ ತರಗತಿಯಲ್ಲಿ ಮಹಿಷಾಸುರ, ಮಾಗಧ, ಕಂಸ, ರಾವಣ ಪಾತ್ರಗಳಲ್ಲಿ ಕುಣಿದಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭ ಕಣ್ಣೂರಿನ ಸೆರೆಮನೆಯಲ್ಲಿ 6 ತಿಂಗಳು ಬಂಧನದಲ್ಲಿದ್ದರು. 1973 ರಲ್ಲಿ ಬಲಗಾಲಿನ ಪಾದಕ್ಕೆ ಕಲ್ಲೊತ್ತು ಶಸ್ತ್ರಚಿಕಿತ್ಸೆ ನಂತರ ನಾಟ್ಯಾಭಿನಯದ ವೇಷಗಾರಿಕೆಯನ್ನು ಬಿಟ್ಟು ಭಾಗವತರಾಗಿ ಹಾಡಿದರು. ಪತ್ನಿ ಶ್ಯಾಮಲೆ ಮತ್ತು ಐವರು ಮಕ್ಕಳಿದ್ದಾರೆ. ಸೆ.7ರಂದು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಂಗಣದಲ್ಲಿ ನಡೆಯುವ ಆಸ್ರಣ್ಣರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಬಂಗಾರದ ಪದಕದೊಂದಿಗೆ ಸನ್ಮಾನಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
|
|
|